
ಬಾಗಲಕೋಟೆಯಲ್ಲಿ ಡಾ.ಎಸ್.ಎಲ್. ಭೈರಪ್ಪ- 2
Date : 18-02-2017, 12:14 ಅಪರಾಹ್ನ
Date : 16-01-2017, 3:57 ಅಪರಾಹ್ನ
ವಾಲ್ಮೀಕಿ ರಾಮಾಯಣ ಮಹಾಕಾವ್ಯದ ಭಿತ್ತಿಯಲ್ಲಿ ರಚಿತವಾಗಿರುವ ಎಸ್. ಎಲ್. ಭೈರಪ್ಪನವರ ‘ಉತ್ತರಕಾಂಡ’ ಕಾದಂಬರಿಯು ರಾಮಾಯಣದ ಬಗ್ಗೆ ಬೇರೊಂದು ದೃಷ್ಟಿಯನ್ನು ಮೂಡಿಸಬಲ್ಲದೆ? ಈ ಹಿನ್ನೆಲೆಯಲ್ಲಿ ಭೈರಪ್ಪ ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ… ಪ್ರಜಾವಾಣಿ ಸಂದರ್ಶನ: ಎಸ್. ಸೂರ್ಯಪ್ರಕಾಶ ಪಂಡಿತ್
Date : 12-01-2017, 5:21 ಅಪರಾಹ್ನ
ನಲವತ್ತು ವರ್ಷಗಳ ಹಿಂದೆ ‘ಪರ್ವ’ದಲ್ಲಿ ದ್ರೌಪದಿ, ಕುಂತಿ, ಗಾಂಧಾರಿಯರನ್ನು ಚಿತ್ರಿಸಿದ ಭೈರಪ್ಪನವರು ಇಲ್ಲಿ ರಾಮಕಥೆ ಯನ್ನು ಸೀತೆಯ ಅನುಭವ ಮತ್ತು ಚಿಂತನೆಯ ಮೂಲಕ ಮೂಡಿಸಿದ್ದಾರೆ. ಮೂಲ ವಾಲ್ಮೀಕಿ ರಾಮಾಯಣದಲ್ಲಿ ಸೀತಾ ಪರಿತ್ಯಾಗವು ಉತ್ತರ ಕಾಂಡದಲ್ಲಿ ಬರುತ್ತದೆ. ‘ಜೋಡಿ ಹಕ್ಕಿಗಳಲ್ಲಿ ಬೇಡನು ಒಂದನ್ನು ಹೊಡೆದು ಅಗಲಿಸಿದ ನೋವಿನ ಭಾವವನ್ನು ವ್ಯಕ್ತಪಡಿಸಲು ನಾನು ರಾಮ ಸೀತೆಯರ ಜೀವನವನ್ನು ಬಳಸಿಕೊಂಡೆ. ಇದನ್ನಾದರೂ ಸುಖಾಂತ್ಯ ಮಾಡಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಕವಿಯು ಏನನ್ನು ತಾನೆ ಬದಲಿಸಬಲ್ಲ? ಎಂಬ ವೈಫಲ್ಯ ಬಾಧಿಸುತ್ತಿದೆ,’ ಎಂದು ವಾಲ್ಮೀಕಿಮಹರ್ಷಿಗಳು ಶೋಕದಲ್ಲಿ […]